ಬದಿಯಡ್ಕ, 27-03-2016:ಪೆರಡಾಲ: ಕುಂಬಳೆ ಸೀಮೆಯ ಪ್ರಮುಖ ಕ್ಷೇತ್ರಗಳಲ್ಲೊಂದಾದ ಬದಿಯಡ್ಕ ಸಮೀಪದ ಪೆರಡಾಲ ಶ್ರೀ ಉದನೇಶ್ವರ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞವು ಹಾಗೂ ಶ್ರೀಮದ್ಭಾಗವತ ಪುರಾಣಾಧಾರಿತ ಯಕ್ಷಗಾನ ಬಯಲಾಟ ಸಪ್ತಾಹವು ಮೇ. 11ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.ಪೂರ್ವಭಾವಿಯಾಗಿ ಶ್ರೀ ಉದನೇಶ್ವರ ಸೇವಾ ಸಮಿತಿಯ ಸಭೆಯು ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶಿವರಾಮಭಟ್ ಅವರು ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಮಕ್ಕಿಕ್ಕಾನ, ಜಯದೇವ ಖಂಡಿಗೆ, ಶಿವರಾಮ ಪೆರ್ಮುಖ, ಗಂಗಾಧರ ಗೋಳಿಯಡ್ಕ, ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ಜಗನ್ನಾಥ ರೈ ಪೆರಡಾಲ ಗುತ್ತು, ನೇಮಿರಾಜ ರೈ ಕೊಡಿಯಡ್ಕ, ಕ್ಷೇತ್ರದ ನೌಕರರು ಹಾಗೂ ಭಕ್ತ ಜನರು ಉಪಸ್ಥಿತರಿದ್ದರು.
ಬದಿಯಡ್ಕ, 08-03-2016:ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಬಲಿ ಉತ್ಸವ, ರಾಜಾಂಗಣ ಪ್ರಸಾದ ಹಾಗೂ ಮಧ್ಯಾಹ್ನ ಪಿಲಿಚಾಮುಂಡಿ ದೈವದ ಕೋಲವು ಮಂಗಳವಾರ ಜರಗಿತು.
ಪೆರಡಾಲ, 28-08-2015:ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಮಾತೆಯರು ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ವೇದಮೂರ್ತಿ ಶ್ರೀ ಗಿರೀಶ ಭಟ್ಟ ಕಡಗಂಜಿ ಅವರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಓಣಂ ಹಬ್ಬದ ಅಂಗವಾಗಿ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ರಚಿಸಿದ ಹೂವಿನ ರಂಗೋಲಿ ಭಕ್ತಾದಿಗಳ ಕಣ್ಮನ ಸೆಳೆದಿತ್ತು. ಊರ ಭಕ್ತಾದಿಗಳ ಸಹಕಾರದಿಂದ ಪುಷ್ಪ ರಂಗವಲ್ಲಿಯನ್ನು ರಚಿಸಲಾಯಿತು. ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಭಟ್, ಕೃಷಪ್ರಸಾದ ರೈ ಪಳ್ಳತ್ತಡ್ಕ, ಪ್ರಧಾನ ಅರ್ಚಕ ಶಿವರಾಮ ಭಟ್, ಬಾಲಸುಬ್ರಹ್ಮಣ್ಯ ಪೆರಡಾಲ, ಉದಯ ಪಟ್ಟಾಜೆ ಮುಂತಾದವರು ಉಪಸ್ಥಿತರಿದ್ದರು. ಪ್ರಸಾದ ಭೋಜನದ ನಂತರ ಪ್ರಸಿದ್ಧ ಕಲಾವಿದರಿಂದ ಶಾಂಭವೀ ವಿಲಾಸ ಯಕ್ಷಗಾನ ತಾಳಮದ್ದಳೆ ನಡೆಯಿತು.
ಪೆರಡಾಲ: ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಕೊನೆಯ ದಿನ ಸೋಮವಾರ ದಿನಾಂಕ 13-01-2014 ರಂದು ಬೆಳಗ್ಗೆ 5.45ಕ್ಕೆ ಧನುಪೂಜೆ ನಡೆಯಲಿರುವುದು. ಭಕ್ತ ಮಹಾಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.